ಜಮ್ಮು ಮತ್ತು ಕಾಶ್ಮೀರದಲ್ಲಿ(Jammu-Kashmir) ಇತ್ತೀಚಿನ ನಾಗರಿಕ ಹತ್ಯೆಗಳ ನಂತರ 700 ಕ್ಕೂ ಹೆಚ್ಚು ‘ಭಯೋತ್ಪಾದಕ ಸಹಾನುಭೂತಿ’ಗಳನ್ನು(Terrorist Sympathiser) ಕಣಿವೆ ನಾಡಲ್ಲಿ ಬಂಧಿಸಲಾಗಿದೆ. 6 ದಿನಗಳಲ್ಲಿ ಕಾಶ್ಮೀರಿ ಪಂಡಿತ್(Kashmiri Pandit), ಸಿಖ್ ಮತ್ತು ಮುಸ್ಲಿಂ ಸಮುದಾಯದವರು ಸೇರಿದಂತೆ ಏಳು ನಾಗರಿಕರನ್ನು ಹತ್ಯೆ ಮಾಡಿದ ಪ್ರತಿಕ್ರಿಯೆಯಾಗಿ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ 700 ಜನರನ್ನು ಬಂಧಿಸಿವೆ ಎಂದು ತಿಳಿದುಬಂದಿದೆ.
ಬಂಧಿತರಲ್ಲಿ ಸುಮಾರು 500 ನಿವಾಸಿಗಳು ನಿಷೇಧಿತ ಧಾರ್ಮಿಕ ಮತ್ತು ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್ಪಿಗೆ ತಿಳಿಸಿದರು. ಕೊಲೆಗಾರರನ್ನು ಹುಡುಕಲು ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂದೂ ಅಧಿಕಾರಿ ಎಫ್ಪಿಗೆ ತಿಳಿಸಿದರು.
ಬಂಧಿತರಲ್ಲಿ ಹಲವರು ನಿಷೇಧಿತ ಜಮಾತ್-ಇ-ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಅಥವಾ ಶಂಕಿತ ಭೂಗತ ಕೆಲಸಗಾರರು (OGW) ಎಂದು ನಂಬಲಾಗಿದೆ, ಮತ್ತು ಶ್ರೀನಗರ, ಬುಡ್ಗಾಮ್ ಅಥವಾ ದಕ್ಷಿಣ ಕಾಶ್ಮೀರದ ಇತರ ಪ್ರದೇಶಗಳಿಂದ ಬಂದವರು ಎಂದು ಹೇಳಲಾಗಿದೆ.