ಶ್ರೀ ಮಹದೇವ ಶಾಲೆ ಮತ್ತು ಕಾಲೇಜು, ಪತಂಜಲಿ ಯೋಗ ಸಮಿತಿ ಕೊಟ್ಟೂರು

ಶ್ರೀ ಮಹದೇವ ಶಾಲೆ ಮತ್ತು ಕಾಲೇಜು, ಪತಂಜಲಿ ಯೋಗ ಸಮಿತಿ ಕೊಟ್ಟೂರು, ಶ್ರೀ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S – VYASA) ವಿಶ್ವವಿದ್ಯಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ 16.6.2025 ರಿಂದ 21.06.2025ರ ವರೆಗೆ 11 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಯೋಗ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷರಾದ ಪಿ ಪಂಪಾಪತಿ ಇವರು ಪರಿಸರದ ರಕ್ಷಣೆಗಾಗಿ ಸಸಿಗೆ ನೀರನ್ನು ಹಾಕುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಯೋಗ ಮಾಡಿವುದದಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು, ನಮ್ಮ ನೆನಪಿನ ಶಕ್ತಿಯನ್ನು ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ನಿತ್ಯ ಯೋಗವನ್ನು ಮಾಡುವುದರಿಂದ ಜೀವನದಲ್ಲಿ ಶಾಂತಿ, ಸಹನೆ, ಸಹಕಾರದ ಜೊತೆಗೆ ಪ್ರೇಮ ಭಾವನೆ ಬೆಳೆಯಲು ಸಹಕರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಂಸ್ಕಾರ, ಸೇವೆ, ಸಂಘಟನೆ ಮನೋಭಾವನೆ ಬೆಳೆಯಲು ಸಹಕರಿಸುತ್ತದೆ, ನಿತ್ಯ ಬೆಳಗಿನ ಸಮಯದಲ್ಲಿ ಯೋಗ ಮಾಡುವುದರಿಂದ ದಿನಪೂರ್ತಿ ಪ್ರಶಾಂತತೆಯೊಂದಿಗೆ ಚಟುವಟಿಕೆ ಯಿಂದಿರಲು ಇರಲು ನೆರವಾಗುತ್ತದೆ. ಈ ವಿಶೇಷ ಯೋಗ ಶಿಬಿರದ ಉಪಯೋಗವನ್ನು ನಿಮ್ಮೊಂದಿಗೆ ಸ್ಥಳೀಯ ನಿಮ್ಮ ಪೋಷಕರು ಸಹ ಭಾಗವಹಿಸುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಪತಂಜಲಿ ಯೋಗ ಸಮಿತಿಯ ಸಹಯೋಗ ಶಿಕ್ಷಕರಾದ ಕೆ ರಾಮಣ್ಣ ಇವರು ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿ ಯಾಗಿಸಲು ಶ್ರಮಿಸೋಣ ವೆಂದು ಕರೆ ನೀಡಿದರು. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಾಲೆಯ ತಂಡದ ನಾಯಕಿಯಾದ ದಿ!!ಡಾ.ಬಿ ವಿಜಯಕುಮಾರ ಪುತ್ರಿ ಕುಮಾರಿ ಛಾಯಾ ಭಗವತಿ ಹಾಗೂ ತಂಡದವರು ಶಿಬಿರವನ್ನು ನಡೆಸಿಕೊಟ್ಟರು.
ಶಿಬಿರದಲ್ಲಿ ಶ್ರೀ ಮಹದೇವ ಕಾಲೇಜಿನ ಪ್ರಾಂಶುಪಾಲರಾದ ಆರ್ ಮಧುಸೂಧನ್ ಮತ್ತು ಕಾಲೇಜಿನ ಶಿಕ್ಷಕರು, ಸಿಬ್ಬಂದಿಗಳು ಹಾಗೂ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.