ದೇಶ

ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶ ಮುಂಬೈ ಪೊಲೀಸರಿಗೆ ರವಾನೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಒಡ್ಡಿದ ಸಂದೇಶವೊಂದನ್ನು ಮುಂಬೈ ಪೊಲೀಸ- ರಿಗೆ ಶನಿವಾರ ಕಳಿಸಲಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಂದೇಶ ರವಾನೆಯಾದ ಸಂಖ್ಯೆಯನ್ನು ಟ್ರೇಸ್ ಮಾಡಿದ್ದು, ಅದು ರಾಜಸ್ಥಾನದ ಅಜೇರ್‌ನಲ್ಲಿ ಪತ್ತೆಯಾಗಿದೆ. ಸಂಚಾರಿ ಪೊಲೀಸರ ವಾಟ್ಸ್ ಅಪ್ ಸಹಾಯವಾಣಿ ಸಂಖ್ಯೆಗೆ ಐಎಸ್‌ಐ ಏಜೆಂಟ್ ಎಂದು ಪರಿಚಯಿಸಿಕೊಂಡ ಇಬ್ಬರು ಕಳಿಸಿದ ಸಂದೇಶದಲ್ಲಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಒಡ್ಡಲಾಗಿದೆ.

ಸಂದೇಶವನ್ನು ಕಳಿಸಿದಾತ ಮಾನಸಿಕ ಅಸ್ವಸ್ಥನಾಗಿರಬಹುದು ಅಥವಾ ಮದ್ಯದ ನಶೆಯಲ್ಲಿ ಕೃತ್ಯ ಎಸಗಿರಬಹುದು ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಮೊದಲು ನಟ ಸಲ್ಮಾನ್ ಖಾನ್ ಅವರಿಗೂ ಬೆದರಿಕೆ ಒಡ್ಡಿ ಸಂಚಾರಿ ಪೊಲೀಸರ ವಾಟ್ಸ್ ಅಪ್ ಸಹಾಯವಾಣಿಗೆ ಸಂದೇಶ ಕಳಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button