ಕೊಟ್ಟೂರು ಶ್ರೀ ಗುರು ಬಸವೇಶ್ವರಸ್ವಾಮಿಯ ಕಾಣಿಕೆ ಹುಂಡಿಯಲ್ಲಿ 65,63,795 ರೂ ಸಂಗ್ರಹ,

ಕೊಟ್ಟೂರು : ಲಕ್ಷಾಂತರ ಭಕ್ತರ ಆರಾದ್ಯ ದೇವ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ
65,63,795. ಅರವತ್ತು ಐದು ಲಕ್ಷದ ಅರವತ್ತು ಮೂರು ಸಾವಿರದ ಏಳು ನೂರ ತೊಂಬತ್ತು ಐದು ರೂಪಾಯಿಗಳು
ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಅಯುಕ್ತರಾದ ಎಚ್ ಗಂಗಾಧರಪ್ಪ ಅವರು ತಿಳಿಸಿದರು.
ಈ ಸಂಬಂಧ ದೇವಸ್ಥಾನದ ಹಿಂಭಾಗದಲ್ಲಿ ಶನಿವಾರ ಬೆಳಗ್ಗೆನಿಂದ ಸಂಜೆಯವರೆಗೂ ನಡೆಯಿತು.

ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಮತ್ತು ಇಂದೂ ಶಾಲಾ ಮಕ್ಕಳು ಎಣಿಕಾ ಕಾರ್ಯ ಕೈಗೊಂಡರು. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗಂಗಾಧರಪ್ಪ, ಮಲ್ಲಪ್ಪ ಕಾರ್ಯ ನಿರ್ವಹಾಕ ಅಧಿಕಾರಿಗಳು, ಶೆಖರಯ್ಯ ಪ್ರಧಾನ ಧರ್ಮಕರ್ತರು,
ಕೆಂಪಳ್ಳಿ ಗುರುಸಿದ್ಧನ ಗೌಡ, ಕೆ.ಎಸ್.ನಾಗರಾಜ ಗೌಡ, ಎಸ್.ಪ್ರೇಮಾನಂದಗೌಡ, ಆಯಾಗಾರ ಬಳಗದವರು, ವ್ಯವಸ್ಥಾಪಕರು ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ಸುನಿಲ್ ಕುಮಾರ್, ಗೌಸಿಯಾ ಬೆಗಾಂ,
ಮನಮೋಹರ, ಪ್ರವೀಣ್, ಮಹಾಂತೆಶ್, ದೀಪು, ಕಾರ್ತಿಕ,ಶಿವು, ಪ್ರಾಶಾಂತ್, ಸುರೇಶ್, ರೇಣುಕಾ,
ಎ ಕೊಟ್ಟೂರೆಶ್ವರಿ , ಮತ್ತಿತರರು ಊರಿನ ಪ್ರಮುಖರು ಪಾಲ್ಗೊಂಡಿದ್ದರು.
ಶ್ರೀ ಸ್ವಾಮಿಗೆ ಹರಕೆ ಹೊತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೆಲ ಭಕ್ತರು ಪತ್ರ ಬರೆದು ಕಾಣಿಕೆ ಹುಂಡಿ ಗಳಲ್ಲಿ ಹಾಕಿರುವುದು ಕಥೆ ಯಾಗಿದೆ.
ವರದಿ : C ಕೊಟ್ರೇಶ್ tv8kannada ಬಳ್ಳಾರಿ