Bangalore Crime News: ಸಂಬಳ (salary)ನೀಡುವ ವಿಚಾರವಾಗಿ ಇಬ್ಬರು ನೌಕರರ(employees) ನಡುವೆ ಶುರುವಾದ ಜಗಳ ಭೀಕರ ಕೊಲೆಯಲ್ಲಿ (murder) ಅಂತ್ಯವಾಗಿದೆ. ಸಹೋದ್ಯೋಗಿ ಯುವತಿಗೆ ಸ್ವಜನ ಪಕ್ಷಪಾತ ಮಾಡಿ ಹೆಚ್ಚಿನ ಸಂಬಳ ನೀಡುತ್ತಿದ್ದೀಯಾ ಎಂದು ಆರೋಪಿಸಿ ಸೂಪರ್ ವೈಸರ್ (supervisor) ನ ಕೊಲೆ ಮಾಡಲಾಗಿದೆ.

ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಕೇಶವ್(40) ಎಂಬುವರ ಕೊಲೆಯಾಗಿದೆ. ಕೊಲೆಯಾದ ಕೇಶವ್ ಹಾಗೂ ಆರೋಪಿ ಶಿವಣ್ಣ ಒಟ್ಟಿಗೆ ಮಾಲ್ಗುಡಿ ಫಾರ್ಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೇಶವ್ ಸೂಪರ್ ವೈಸರ್ ಆಗಿದ್ದರೆ, ಶಿವಣ್ಣ ಸಾಮಾನ್ಯ ನೌಕರನಾಗಿದ್ದ.
ಸೂಪರ್ ವೈಸರ್ ಕೇಶವ್ ಮಾಲ್ಗುಡಿ ಫಾರ್ಮ್ಸ್ ನಲ್ಲಿ ನೌಕರರಿಗೆ ಸಂಬಳ ನಿರ್ಧರಿಸುವ ಅಧಿಕಾರದಲ್ಲಿದ್ದರು. ಸಂಬಳ ವಿಚಾರವಾಗಿ ಇಬ್ಬರು ಮದ್ಯಪಾನ ಮಾಡುವಾಗ ಮಾತನಾಡಿಕೊಂಡಿದ್ದಾರೆ. ನಿನಗೆ ಬೇಕಾದ ಯುವತಿಗೆ ಹೆಚ್ಚಿನ ಸಂಬಳ ಕೊಟ್ಟಿದ್ದೀಯಾ ಎಂದು ಕೇಶವ್ ವಿರುದ್ಧ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದನು.