ರಾಜಧಾನಿಬೆಂಗಳೂರಿನಲ್ಲಿ (Bengaluru)ಒಂದೆಡೆಧಾರಕಾರಮಳೆಯಿಂದ(Rainfall)ಜನಜೀವನಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ಸುರಿದಭಾರೀಮಳೆಯಿಂದಾಗಿ ಕೂಡ ನಗರದಹಲವುಮನೆಗಳಲ್ಲಿನೀರುನುಗ್ಗಿಅವಾಂತರಸೃಷ್ಟಿಯಾಗಿತ್ತು. ಜನರುಮಳೆಯಿಂದಾಗಿಪರದಾಡುತ್ತಿರುವಮಧ್ಯೆಬೆಸ್ಕಾಂ(BESCOM)ಪ್ರತಿದಿನವಿವಿಧಪ್ರದೇಶಗಳಲ್ಲಿಪವರ್ಕಟ್(Power Cut)ಮಾಡುತ್ತಿದ್ದು, ಇದುಜನರಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ಒಂದೆಲ್ಲ ಒಂದು ಏರಿಯಾದಲ್ಲಿ ಪವರ್ ಕಟ್ ಸಮಸ್ಯೆಯಾಗುತ್ತಿದೆ. ಇಂದೂ ಕೂಡ ಕೆಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಯಾವ್ಯವ ಪ್ರದೇಶಗಳಲ್ಲಿ ಪವರ್ ಕಟ್ ?
ಬೆಳತೂರ್, ಕಾಡುಗೋಡಿ ಅಂಬೇಡ್ಕರ್ ನಗರ ಜೆಪಿ ನಗರ 2 ನೇ ಹಂತ, ಕೊಡಿಗೇಹಳ್ಳಿ, ಸರ್ಕಾರಿ ಶಾಲೆಯ ಸುತ್ತಮುತ್ತಲಿನ ಪ್ರದೇಶ, ವಾಜರಹಳ್ಳಿ, ಗಜಾರೆ ಲೇಔಟ್, ಎಂಜಿ ರಸ್ತೆ, ಕಾವೇರಿ ಲೇಔಟ್ ಹಾಗೂ ಗಾಯತ್ರಿ ಲೇಔಟ್, ಬಸವನಪುರ, ಕೆಆರ್ ಪುರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.