ಯೋಗವು ನಮ್ಮ ದೇಹ, ಮನಸ್ಸನ್ನುನಿಯಂತ್ರಣಾ ಸಾಧಿಸಲು ಸಾಧ್ಯ -ಕೆ ರಾಮಣ್ಣ ಯೋಗ ಶಿಕ್ಷಕರು

ಕೊಟ್ಟೂರು : ಯೋಗವು ನಮ್ಮ ದೇಹದ ಮೇಲೆ ಮತ್ತು ಮನಸ್ಸಿನ ನಿಯಂತ್ರಣವನ್ನ ಸಾಧಿಸಲು ಸಹಾಯ ಮಾಡುತ್ತದೆ ಹಾಗೂ ಯೋಗ ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ ಅದರಂತೆಯೇ ನಮ್ಮ ದೇಹವನ್ನ ದಂಡಿಸುವ
ದರಿಂದ ನಮಗೆ ಯೋಗದ ಮಹತ್ವ ಅರ್ಥವಾಗುತ್ತದೆ ಎಂದು ಕೆ ರಾಮಣ್ಣ ಯೋಗ ಶಿಕ್ಷಕರು ಹೇಳಿದರು.

ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ ಎಂ ರವಿಕುಮಾರ್ ಕಾಲೇಜು ಪ್ರಾಂಶುಪಾಲರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯೋಗ ಎಂಬುದು ಭಾರತದ ಅತ್ಯಂತ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಯೋಗವನ್ನು 177 ರಾಷ್ಟ್ರಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಮಾನ್ಯ ಮಾಡಿದೆ ಪ್ರಪಂಚದಾದ್ಯಂತ ಯೋಗವನ್ನು ಪ್ರಪಂಚದಾದ್ಯಂತ ಜೂನ್ 21 2015 ರಿಂದ ಪ್ರತಿ ವರ್ಷ ಪ್ರತಿವರ್ಷ ಅಂತರಾಷ್ಟ್ರೀಯ ಯೋಗ ದಿನವನ್ನು ಅಂತರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಯಾಗಿ ಆಚರಿಸಲಾಗುತ್ತದೆ. ಯೋಗವು ಆರೋಗ್ಯವನ್ನು ವೃದ್ಧಿಸಿ ಕೊಳ್ಳುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಸಾವನ್ನ ಜಯಿಸುವ ಶಕ್ತಿ ಯೋಗಕ್ಕೆ ಇದೆ ಎಂದು ಹೇಳಿದರು. ಯೋಗವು ದೈಹಿಕ ಮತ್ತು ಮಾನಸಿಕ ಯೋಗ ಕ್ಷೇಮಕ್ಕೆ ವಿಶೇಷ ಪ್ರಯೋಜನಗಳನ್ನು ದೊರಕಿಸಿ ಕೊಡುತ್ತದೆ ಮತ್ತು ಭಾರತದಲ್ಲಿ ಹುಟ್ಟಿಕೊಂಡು ಸ್ವಾಸ್ಥ್ಯ ಅಭ್ಯಾಸವನ್ನು ಜಾಗತಿಕವಾಗಿ ಉತ್ತೇಜಿಸಲಾಗಿದೆ ಎಂದರು . ಅರ್ ವಿ ಪ್ರಕಾಶ್ ,ಜೆ ಬಿ ಸಿದ್ದನಗೌಡ, ಪಿ ರಾಧಾ ಸ್ವಾಮಿ , ಕೆ.ಉಮೇಶ್ ಕೆ.ಕೊಟ್ರೇಶ್ . ಚಂದ್ರಕಾಂತ್, ಇತರರು ವೇದಿಕೆಯಲ್ಲಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕಿ ವಿ.ಭವಾನಿ ನಿರೂಪಿಸಿದರೆ. ಕೊಟ್ರೇಶ್ ಸ್ವಾಗತಿಸಿ ವಂದಿಸಿದರು
