ಏರ್ ಇಂಡಿಯಾ ದುರಂತ: ದುರಂತ ಸ್ಥಳಕ್ಕೆ ಹೋಗಿ ರಿಲ್ಸ್ ಶೋಕಿ ಮಾಡಿದ ಕೇಂದ್ರ ಸಚಿವ ನೆಟ್ಟಿಗರ ಕ್ಲಾಸ್

ಅಹ್ಮದಾಬಾದ್: ನಿನ್ನೆ ( ಜೂನ್ 12 ) ಸರ್ದಾರ್ ವಲ್ಲಭಭಾಯಿ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆಗಿ ಕೆಲವೇ ನಿಮಿಷಗಳಲ್ಲಿ ನೆಲಕ್ಕಪ್ಪಳಿಸಿದ ಏರ್ಇಂಡಿಯಾ ವಿಮಾನ ದುರಂತದಲ್ಲಿ 241 ಮಂದಿ ಮೃತಪಟ್ಟಿದ್ದಾರೆ. 12 ಸಿಬ್ಬಂದಿಗಳು ಸೇರಿದಂತೆ ಒಟ್ಟು 242 ಮಂದಿ ಇದ್ದ ಈ ವಿಮಾನದಲ್ಲಿ ಓರ್ವ ಮಾತ್ರ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
ಅಲ್ಲದೇ ಹಾಸ್ಟೆಲ್ ಮೇಲೆ ವಿಮಾನ ಬಿದ್ದ ಕಾರಣ ಅಲ್ಲಿಯೂ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇತ್ತೀಚೆಗಿನ ದಿನಗಳಲ್ಲಿ ನಡೆದ ಬೃಹತ್ ವಿಮಾನ ದುರಂತ ಇದಾಗಿದೆ. ಘಟನೆ ನಡೆಯುತ್ತಿದ್ದಂತೆ ಅಹ್ಮದಾಬಾದ್ ಪೊಲೀಸರು ಹಾಗೂ ರಕ್ಷಣಾ ಪಡೆಗಳು ಕಾರ್ಯ ಪ್ರವೃತ್ತರಾಗಿದ್ದರು.
ಕೇಂದ್ರ ನಾಗರೀಕ ವಿಮಾನಯಾನದ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಸಹ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ತಾವು ಭೇಟಿ ನೀಡಿದ ಸಂದರ್ಭದ ಹಲವಾರು ವಿಡಿಯೊಗಳನ್ನು ಸೆರೆ ಹಿಡಿದಿದ್ದು, ಅವುಗಳನ್ನು ಎಡಿಟ್ ಮಾಡಿ ತಮ್ಮ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
https://x.com/TARUNspeakss/status/1933229759955152948?t=VG3j5sYxF1f49HgZ2TUDHw&s=19
ಇನ್ನು ಈ ವಿಡಿಯೊಗೆ ಸಾಕಷ್ಟು ವಿರೋಧಿ ಕಾಮೆಂಟ್ಗಳು ಬಂದಿದ್ದು, ಈ ವಿಡಿಯೊ ಎಡಿಟ್ ಆಗಿರುವ ರೀತಿ ಹಾಗೂ ಮ್ಯೂಸಿಕ್ ಕಂಡು ಇದು ರೀಲ್ಸ್ ಶೋಕಿ ಮಾಡುವ ಸಮಯವಲ್ಲ, ಇಂತಹ ಶೋಕಿ ಬಿಟ್ಟು ಕೆಲಸ ಮಾಡಿ ಎಂದು ನೆಟ್ಟಿಗರು ವಿಡಿಯೊ ವಿರುದ್ಧ ಕಿಡಿಕಾರಿದ್ದಾರೆ.