ಮನ ಸೂರೆಗೊಂಡ ಪ್ರೇಕ್ಷಕರ ಗಾನ ಕೋಗಿಲೆಗಳ ಸ್ವರ ಸಂಭ್ರಮ

ಚಾಮರಾಜನಗರ:ಜೂ.09: ಮೈಸೂರಿನ ಲಕ್ಷ್ಮಿ ದಿನೇಶ್ ಮೆಲೋಡಿಸ್ ವತಿಯಿಂದ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಡಾ.ರಾಜಕುಮಾರ್, ಎಸ್.ಪಿ. ಬಾಲಸುಬ್ರಮಣ್ಯಂ ಹಾಗೂ ಎಸ್.ಜಾನಕಿ ಸ್ಮರಣಾರ್ಥ ನಡೆದ ಗಾನ ಕೋಗಿಲೆಗಳ ಸ್ವರ ಸಂಭ್ರಮ ಕಾರ್ಯಕ್ರಮ ಪ್ರೇಕ್ಷಕರ ಮನ ಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಅವರು ಮಾತನಾಡಿ, ಶ್ರೀಮತಿ ಲಕ್ಷ್ಮಿ ದಿನೇಶ್ ಅವರು ಪ್ರಥಮ ಬಾರಿಗೆ ನಗರದಲ್ಲಿ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಇವರ ಕಾರ್ಯಕ್ರಮ ರಾಜ್ಯದಾದ್ಯಂತ ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಾವಿದ ಹಾಗೂ ಚೆಸ್ಕ್ ಇಂಜಿನಿಯರ್ ಮಯೂರ್ ಗಡಿ ಭಾಗ ಚಾಮರಾಜನಗರದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟನೆ ಮತ್ತು ಗಾಯನದ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಸ್ವರ ಸಂಭ್ರಮ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮತ್ತಷ್ಟು ಮೆರಗು ನೀಡಲಿ ಎಂದು ಆಶಿಸಿದರು.
ಇದೆ ವೇಳೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್, ಅಬಕಾರಿ ಇಲಾಖೆಯ ಎಂ.ಮಹೇಶ್, ಇಂಜಿನಿಯರ್ ಚಂದ್ರಶೇಖರ್, ಉಪನ್ಯಾಸಕಿ ಅನ್ನಪೂರ್ಣ, ಸುನಿಲ್ ಪಾಳ್ಯನ್, ಉಪನ್ಯಾಸಕ ನಂಜುಂಡಯ್ಯ, ಶಿವಶಂಕರ್ ಮೂರ್ತಿ ಸೇರಿದಂತೆ ಇತರರು ಸುಮಧುರ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕಿ ಶ್ರೀಮತಿ ಲಕ್ಷ್ಮಿ ದಿನೇಶ್, ರಾಘವೇಂದ್ರ, ಶಿಕ್ಷಕ ನಂಜುಂಡಸ್ವಾಮಿ(ಪಾಪು) ಸೇರಿದಂತೆ ಇತರರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ