ನಿಮಗೆ ಉಸಿರು ಹಾಡಲು ಆಮ್ಲ ಜನಕ ಬೇಕಾದರೆ ಮನೆಗೊಂದು ಮರ ಬೆಳೆಸಿ : ಪ್ರಕೃತಿ ಫೌಡೇಶನ್ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ) ಮನವಿ.

ಮಸ್ಕಿ : ಪ್ರಕೃತಿ ಫೌಂಡೇಶನ್ ಹಾಗೂ
ಅಭಿನಂದನ್ ಸಂಸ್ಥೆಯು ಸಹಯೋಗದಲ್ಲಿ ಪರಿಸರ ಜಾಗೃತಿ ಅಂಗವಾಗಿ ಮಸ್ಕಿ ಹಸಿರು ಬೃಂದಾವನ – ಮನೆಗೊಂದು ಮರ ಅಭಿಯಾನದ ಕಾರ್ಯಕ್ರಮ ಪಟ್ಟಣದ ಪಲ್ಲೆದ್ ಲೇಔಟ್ ನಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ವೇಳೆ, ಪ್ರಕೃತಿ ಫೌಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ) ರವರು ಮಾತನಾಡಿ,
ಪ್ರತಿಯೊಬ್ಬರಿಗೂ ಉಸಿರು ಹಾಡಲು ಆಮ್ಲ ಜನಕ ಬೇಕಾದರೆ ಎಲ್ಲರು ಮನೆಗೊಂದು ಮರ ಬೆಳೆಸಿ
ಈ ಪರಿಸರದ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿದಾಗ ಕೆಲವೇ ವರ್ಷ ಗಳಲ್ಲಿ ಮಸ್ಕಿ ಪಟ್ಟಣ ಹಸಿರುಮಾಯ ವಾಗುತ್ತದೆ. ನಮ್ಮಗಾಗಿ ಇರುವ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂದುರು
ಶಿಕ್ಷಕರಾದ ಸಿದ್ದಾರೆಡ್ಡಿ ಗಿಣಿವಾರ ರವರು ಮಾತನಾಡಿ, ಮನೆಗೊಂದು ಮರ ಅಭಿಯಾನ” ಎಂಬ ಈ ಪರಿಸರ ಕಳಕಳಿಯ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಸಿಕ್ಕರೆ ಮಸ್ಕಿಯು ಹಸಿರು ನಗರ ಆಗುವಲ್ಲಿ ಯಾವ ಅನುಮಾನವಿಲ್ಲ. ಈ ಒಂದು ಅಭಿಯಾನಕ್ಕೆ ಕರೆ ನೀಡಿದ ಪ್ರಕೃತಿ ಫೌಂಡೇಶನ್ ಶಿವಮೂರ್ತಿ ಗದ್ಗಿಮಠ ಬಳಗಾನೂರ ಹಾಗೂ ಅಭಿನಂದನ್ ಸಂಸ್ಥೆಗೆ ಇನ್ನಷ್ಟು ಶಕ್ತಿ ಜೊತೆಯಾಗಲಿ ಅವರ ಕಾರ್ಯ ಯಶಸ್ವಿಯಾಗಿ ನಡೆಯಲಿ
ಎಂದುರು.

ಈ ವೇಳೆ, ಸಮಾಜ ಸೇವಕರಾದ ಸಿದ್ದಯ್ಯ ಹೆಸರೂರು, ರಾಮಣ್ಣ ಹಂಪರಗುಂದಿ, ಕುಮಾರೆಪ್ಪ , ಬಸವರಾಜ ಯದ್ದಲದಿನ್ನಿ, ಶಾಂತಕುಮಾರ್, ರಾಜಣ್ಣ ಸಾನಬಾಳ, ವೀರೇಶ ಕಮತರ, ಸೂಗುರಯ್ಯ, ಸುರೇಶ್ ಬ್ಯಾಳಿ, ಮಲ್ಲಿಕಾರ್ಜುನ ಪಾಲೀಲ್,ಸೂಗೂರೆಡ್ಡಿ, ನಾಗರಾಜ ಕುಂಬಾರ, ಸೋಮಶೇಖರ್ ಸಿರವಾರಮಠ,ಸ್ಪೂರ್ತಿ ಧಾಮದ ಮಕ್ಕಳ ಇದ್ದರೂ.