ಇತ್ತೀಚಿನ ಸುದ್ದಿ

ಪುನೀತ್ ಸಮಾಧಿ ಮುಂದೆ ಟ್ರೋಫಿ ಹಿಡಿದು ಪೋಸ್ ಕೊಟ್ಟ ಶಿವಾನಿ

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾದ ಸರಿಗಮಪ ಸೀಸನ್ 21ರ ವಿನ್ನರ್ ಶಿವಾನಿ ಅವರು ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ.


ಉತ್ತರ ಕರ್ನಾಟಕದ ಬೀದರ್ ನ ನಿವಾಸಿಯಾದ ಶಿವಾನಿಯವರು ತಮ್ಮ ಕುಟುಂಬ ಸಮೇತವಾಗಿ ದಿವಂಗತ ಪುನೀತ್ ರಾಜಕುಮಾರ್ ಅವರ ಪುಣ್ಯಭೂಮಿಗೆ ಭೇಟಿ ನೀಡಿದ್ದಾರೆ.
ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ್ಲ ಅಗಲಿ ವರ್ಷಗಳೇ ಕಳೆದರೂ ಕೂಡ ಅವರ ನೆನಪು ಅವರು ಮಾಡಿರುವಂತಹ ಒಳ್ಳೆಯ ಕಾರ್ಯ ಮಾತ್ರ ನಮ್ಮಿಂದ ಯಾವತ್ತು ದೂರ ಆಗಿಲ್ಲ.

ಅಪ್ಪು ಅವರು ಎಷ್ಟೋ ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆ ಹಾಗಾಗಿ ಅವರ
ಅಭಿಮಾನಿಗಳು. ಇಂದಿಗೂ ಕೂಡ ಅವರ ಸಮಾಧಿಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದುಕೊಂಡು ಬರುತ್ತಾರೆ ಅದರಂತೆ ಸರಿಗಮಪ ಸೀಸನ್ 21ರ ವಿನ್ನರ್ ಶಿವಾನಿಯವರು ಕೂಡ ತಮ್ಮ ಕುಟುಂಬ ಸಮೇತವಾಗಿ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ.


ಅಷ್ಟೇ ಅಲ್ಲದೆ ಸರಿಗಮಪದಲ್ಲಿ ಗೆದ್ದ ಟ್ರೋಫಿ ಅನ್ನು ಸಮಾಧಿ ಮುಂದೆ ಇಟ್ಟು ಫೋಟೋ ತೆಗೆದುಕೊಂಡಿದ್ದಾರೆ ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Related Articles

Leave a Reply

Your email address will not be published. Required fields are marked *

Back to top button