ಇತ್ತೀಚಿನ ಸುದ್ದಿ

“ಯೋಗಕ್ಕೆ ಪೂರಕ ಸಹಕಾರ ಮುಖ್ಯ”: ಯೋಗ ಶಿಕ್ಷಕ ರಾಮಣ್ಣ

ಕೊಟ್ಟೂರು : ಸದೃಢ ಆರೋಗ್ಯ ಕಾಪಾಡಲು ಯೋಗ ಉತ್ತಮವಾದ ಆಯಮ ವಾಗಿದೆ.ಎಲ್ಲಾ ವಯೋಮಾನದವರು ಯೋಗ ಮಾಡಬೇಕು ಎಂದು ಯೋಗ ಶಿಕ್ಷಕ ರಾಮಣ್ಣ ಅವರು ಮಾತನಾಡಿದರು.
ಪಟ್ಟಣದ ಸರ್ಕಾರಿ ಸಮೂದಾಯ ಆರೋಗ್ಯ ಕೇಂದ್ರ ಬಳಿ ಇರುವ ನ್ಯೂ ವಿದ್ಯಾ ಭಾರತಿ ಶಾಲಾ ಆವರಣದಲ್ಲಿ ಗುರುವಾರ ಉಚಿತ ಯೋಗ ಶಿಬಿರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಾವು ಆರೋಗ್ಯವಾಗಿ ಇರುವುದರ ಜೊತೆಗೆ ನಮ್ಮ ಪರಿವಾರವೂ ಆರೋಗ್ಯದಿಂದ ಇರಲು ಇಲ್ಲಿನ ವಾತಾವರಣ ಸೂಕ್ತ ವಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ಪಟ್ಟಣದಲ್ಲಿ ಮೂರು ಕಡೆಗಳಲ್ಲಿ ಯೋಗ ನಡೆಯುತ್ತಿದೆ.
, ಜೂನ್ 16 ರಿಂದ ದಿವಂಗತ ಡಾ|| ವಿಜಯಕುಮಾರ್ ಇವರ ಸುಪುತ್ರಿ ಛಾಯಾ ಭಗವತಿ ಅವರ 6 ಜನರ ತಂಡ ನಿರಂತರವಾಗಿ 5 ದಿನಗಳ ಕಾಲ ನಮ್ಮೆಲ್ಲರಿಗೂ ಯೋಗದ ಮೂಲಕ ಆರೋಗ್ಯ ಸಲಹೆಗಳನ್ನು ನೀಡಲಿದ್ದಾರೆ ಎಂದರು.
ಯೋಗ ದಿನಾಚರಣೆ ಆಚರಣೆ ಉದ್ದೇಶವಾಗಿದೆ ಎಂದರು.
ಪ್ರಥಮ ದಿನವಾದ ಇಂದು ಸುಮಾರು 20 ಕ್ಕೂ ಹೆಚ್ಚು ಜನ ಯೋಗಾ ಆಸ್ತಕರು ಶಿಬಿರದಲ್ಲಿ ಭಾಗವಹಿಸಿದ್ದರು. ಅಲಬೂರು ಶಾಂತಕುಮಾರ್ ಮಾತನಾಡಿ ಯೋಗಕ್ಕೆ ತನ್ನದೇಯಾದ ಶಿಸ್ತು ಇದೆ. ಅದನ್ನ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ, ನಿಮ್ಮಲ್ಲಿರುವಂತ ಒಳ್ಳೆಯ ಮಾಹಿತಿ ಇತರರೊಂದಿಗೆ ಹಂಚಿಕೊಳ್ಳಿ, ಪ್ಲಾಸ್ಟಿಕ್ ಬಳಕೆ ಅತ್ಯಂತ ಕಡಿಮೆ ಮಾಡಿ, ಮದುವೆಗಳಲ್ಲಿ ಅತೀ ಹೆಚ್ಚಾಗಿ ಪ್ಲಾಸ್ಟಿಕ್ ಬಾಟಲ್ ನೀರು ಕೊಡುತ್ತಾರೆ ಇದು ಪರಿಸರಕ್ಕೆ ಹಾಗೂ ಆರೋಗ್ಯಕ್ಕೆ ಹಾನಿಕಾರಕ, ಒಂದು ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು ಸುಮಾರು 800 ನೂರು ವರ್ಷ ಬೇಕಾಗುತ್ತದೆ ಎಂದು ಹೇಳಿದರು.
ಪೊಲೀಸ್ ವಿರುಪಾಕ್ಷಿ ಹಾಗೂ ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷ ಚಿಗಟೇರಿ ಕೊಟ್ರೇಶ್ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button