ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುತ್ತಿರುವ ಬಸವಣ್ಣನ ಭಕ್ತರು :

ಹಳ್ಳದಲ್ಲಿ ಟ್ರ್ಯಾಕ್ಟರ್ ದಾಟಲಾಗದೆ ಪ್ರಯಾಸಪಟ್ಟು ಏರಲೆತ್ನಿಸಿದಾಗ ಬಾಲಕನ ಕೈ ಬೆರಳುಗಳು ಮುರಿತಾ ಆಸ್ಪತ್ರೆಗೆ ದಾಖಲು.
ಮಸ್ಕಿ : ತಾಲ್ಲೂಕಿನ ಬಳಗಾನೂರಿನ ಪಕ್ಕದಲ್ಲಿರುವ ಚಿಕ್ಕ ಉದ್ಬಾಳದಲ್ಲಿ ಬಸವಣ್ಣನ ದೇವಸ್ಥಾನವಿದೆ.ಆ ದೇವಸ್ಥಾನಕ್ಕೆ ಬಳಗಾನೂರಿನ ಭಕ್ತರು ದರ್ಶನ ಪಡೆಯಬೇಕಾದರೆ ನಾರಾಯಣ ನಗರ ಕ್ಯಾಂಪಿನ ಮತ್ತು ಚಿಕ್ಕ ಉದ್ಬಾಳದ ಮಧ್ಯದಲ್ಲಿರುವ ಹಳ್ಳವನ್ನು ದಾಟಿ ಹೋಗಬೇಕು.
ಅದು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಭಕ್ತರು ದಾಟಲು ಹರಸಾಹಸ ಪಡಬೇಕಾಗುತ್ತದೆ.ಈ ಹಳ್ಳಕ್ಕೊಂದು ಸೇತುವೆ ನಿರ್ಮಾಣಮಾಡಿದರೆ ಭಕ್ತರಿಗೆ ಮತ್ತು ಸುತ್ತಲಿನ ರೈತರಿಗೆ ಕೃಷಿ ಉತ್ಪನ್ನಗಳನ್ನು ನಗರದ ಮಾರುಕಟ್ಟೆಗೆ ಸರಾಗವಾಗಿ ಸಾಗಿಸಲು ಅನುಕೂಲವಾಗುತ್ತದೆ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರಗತಿ ನಿಧಿಗಳಿಗೆ ಮನವಿ ಸಲ್ಲಿಸಿದ್ದಾಯಿತು,ನೇರವಾಗಿ ಭೇಟಿಯಾಗಿ ಹೇಳಿದ್ದಾಯ್ತು ಕೆಲಸ ಮಾತ್ರ ಆಗಲಿಲ್ಲ
ಈಗಲೂ ಸೇತುವೆ ಭಕ್ತರ ಮನದಲ್ಲಿ ನೇತಾಡುತ್ತಿದೆಯೇ ಹೊರತು ಹಳ್ಳದ ದಂಡೆಯ ಮೇಲೆ ಬರಲೇಯಿಲ್ಲ ವೆಂದು ಬಸವಣ್ಣನ ಅರ್ಚಕರು ಹಾಗೂ ಭಕ್ತರು ಅಳಲನ್ನು ತೋಡಿಕೊಂಡರು.

ನಿನ್ನೆ ಚಿಕ್ಕ ಉದ್ಬಾಳ ಬಸವಣ್ಣನ ಜಾತ್ರೆ ನಡೆದಿತ್ತು,ಬಳಗಾನೂರಿನಿಂದ ಟ್ರ್ಯಾಕ್ಟರ್ನಲ್ಲಿ ಭಕ್ತರು ಹೋಗುತ್ತಿದ್ದರು ಈ ಹಳ್ಳದಲ್ಲಿ ಟ್ರ್ಯಾಕ್ಟರ್ ದಾಟಲಾಗದೆ ಪ್ರಯಾಸಪಟ್ಟು ಏರಲೆತ್ನಿಸಿದಾಗ ಟ್ರಾಲಿಯಲ್ಲಿ ನಿಂತಿದ್ದ ಸುಮಾರು ಹತ್ತುವರ್ಷ ವಯಸ್ಸಿನ ಬಾಲಕನ ಕೈ ಬೆರಳುಗಳು ಮುರಿದು ಹೋಗಿವೆ.ಬಾಲಕನ ಆರ್ಥನಾದ ಹೆತ್ತವರ ಸಂಕಟ ನೆರೆದ ಜನರಲ್ಲಿ ಆತಂಕವನ್ನುಂಟು ಮಾಡಿತು.
ಭಕ್ತವೃಂದ ಎಷ್ಟು ಬಾರಿ ಮನವಿ ಕೊಟ್ಟರೂ ಪ್ರಯೋಜನವಿಲ್ಲ,ಈಗ ಹುಡುಗನ ಬೆರಳುಗಳು ಕಟ್ಟಾದವು,ಮುಂದೆ ಇನ್ನೇನು ಕಾದಿದೆಯೋ? ಎಂದು ಜನಪ್ರಗತಿ ನಿಧಿಗಳನ್ನು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಈಗಲಾದರೂ ಸಾರ್ವಜನಿಕರ,ಭಕ್ತರ ಹಿತ ದೃಷ್ಟಿಯಿಂದ
ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ಮುಂದಾಗ ಬಹುದಾದ ದುರಂತಗಳನ್ನು ತಪ್ಪಿಸಿದಂತಾಗುತ್ತದೆ.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ