ಇತ್ತೀಚಿನ ಸುದ್ದಿ

ಸಂತ ಪೌಲರ ಮಾಸ್ ಗ್ರೂಪ್ ನಿಂದ ಶಿಕ್ಷಕ ಜೋಸೆಫ್ ಗೆ ಬೀಳ್ಕೊಡುಗೆ ಹಾಗೂ ಹುಟ್ಟುಹಬ್ಬದ ಸನ್ಮಾನ

ಚಾಮರಾಜನಗರ: ಜೂ.09: ಶಿಕ್ಷಕ ಜೋಸೆಫ್.ಎನ್ ಅವರಿಗೆ ಸಂತ ಪೌಲರ ಮಾಸ್ ಗ್ರೂಪ್ ವತಿಯಿಂದ ಬೀಳ್ಕೊಡುಗೆ ಹಾಗೂ ಹುಟ್ಟು ಹಬ್ಬದ ಸನ್ಮಾನ ನೆರವೇರಿಸಲಾಯಿತು.
ಇದೆ ವೇಳೆ ಫಾದರ್ ಸಿ.ಆಂತೋನಪ್ಪ ಮಾತನಾಡಿ, ಶಿಕ್ಷಕರಾದ ಜೋಸೆಫ್ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಅಲ್ಲದೆ ಇನ್ನು ಹೆಚ್ಚಿನ ಆರೋಗ್ಯ ಭಾಗ್ಯ ಲಭಿಸಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಶಿಕ್ಷಕ ಜೋಸೆಫ್.ಎನ್ ಮಾತನಾಡಿ, ನನಗೆ ಬೀಳ್ಕೊಡುಗೆ ಹಾಗೂ ಹುಟ್ಟುಹಬ್ಬದ ಸನ್ಮಾನ ನೆರವೇರಿಸಿದ ಸಂತ ಪೌಲರ ಮಾಸ್ ಗ್ರೂಪ್ ನ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ, ಇದೇ ರೀತಿ ನಿಮ್ಮ ಎಲ್ಲರ ಸಹಕಾರ ಎಂದೆಂದೂ ನನ್ನ ಮೇಲೆ ಹಾಗೂ ನಮ್ಮ ಕುಟುಂಬದ ಮೇಲೆ ಎಂದೆಂದೂ ಹೀಗೆ ಇರಲಿ ಅಲ್ಲದೆ ಈ ಕಾರ್ಯಕ್ರಮಕ್ಕೆ ಆಗಮಿಸಿರುವಂತಹ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಸ್ ಗ್ರೂಪ್ ನ ಅಧ್ಯಕ್ಷ ರಾಜ್ ಕುಮಾರ್, ವಿಜಯ್, ಪೊಲೀಸ್ ಆಂತೋನಿ ಪ್ರಸಾದ್, ಶಿಕ್ಷಕರಾದ ಸುಶೀಲ, ಕುಮಾರ್.ಎನ್, ಅನಿಲ್, ಪ್ರದೀಪ್, ಪ್ರಸನ್ನ, ಜಾನ್ ಬಾಸ್ಕೋ, ಮೋಹನ್ ಕುಮಾರ್, ನಾಗರಾಜು, ಉಮೇಶ್, ರವಿ, ಸುಂದರರಾಜ್, ಸುನಿಲ್, ಸದಸ್ಯರಾದ ಜೋಸೆಫ್, ಸುಂದರ್, ಮೈಕ್ ಸ್ಟೀವನ್, ಮೈಕಲ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಎಚ್.ಎಂ. ಶಿವಣ್ಣ ಮಂಗಲ ಹೊಸೂರು, ಸದಸ್ಯರಾದ ಬಂಗಾರು, ವಸಂತ, ಶಿಕ್ಷಕರಾದ ಎಚ್.ಎಂ. ನಾಗರಾಜು ಸೇರಿದಂತೆ ಇತರರಿದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ

Related Articles

Leave a Reply

Your email address will not be published. Required fields are marked *

Back to top button