ಇತ್ತೀಚಿನ ಸುದ್ದಿ

ಮಸ್ಕಿ ಹಸಿರು ಬೃಂದಾವನ – ಮನೆಗೊಂದು ಮರ ಅಭಿಯಾನ

ಮಸ್ಕಿ: ಪಟ್ಟಣದ ಅಭಿನಂದನ್ ಸಂಸ್ಥೆಯ ಪರಿಸರ ಕಾರ್ಯಕ್ರಮ “ಮಸ್ಕಿ ಹಸಿರು ಬೃಂದಾವನ – ಮನೆಗೊಂದು ಮರ” ಅಭಿಯಾನವು ಇಂದು ಸಂಡೇ ಫಾರ್ ಸೋಶಿಯಲ್ ವರ್ಕ್ ನ 205 ನೇ ಸೇವಾ ಕಾರ್ಯದ ಮೂಲಕ ಮಸ್ಕಿಯ ಗ್ರೀನ್ ಸಿಟಿಯ ನಿವಾಸಿಗಳ ಅವರ ಮನೆಗಳ ಮುಂದೆ ಸಸಿಗಳನ್ನು ನೆಟ್ಟು ಸಸಿಗಳ ಪೋಷಣೆಯ ಕುರಿತು ಮಾಹಿತಿಯನ್ನು ನೀಡಿ ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಮನೆಯವರಿಗೆ ವಹಿಸಲಾಯಿತು.

ಈ ಸೇವಾ ಕಾರ್ಯದಲ್ಲಿ ಶಿಕ್ಷಕರಾದ ಮಹಾಂತೇಶ ಹೆಚ್, ಗ್ರೀನ್ ಸಿಟಿಯ ನಿವಾಸಿಗಳು ಹಾಗೂ ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ತೆಗೆದುಕೊಂಡ ಶಿವಮೂರ್ತಿ ಕಸ್ತೂರಯ್ಯ ಸ್ವಾಮಿ, ಶಿಕ್ಷಕರಾದ ಭೀಮ್ಶೆಪ್ಪ, ಆರ್ ಮಣಿಕಂಠ ರೆಡ್ಡಿ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಡಿಗೇರ್, ಕಿಶೋರ್, ವೆಂಕೋಬ, ಅಭಿನಂದನ ಸ್ಪೂರ್ತಿಧಾಮದ ಮಕ್ಕಳು ಮತ್ತಿತರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button