ನಮ್ಮಗಾಗಿ ಇರುವ ಪರಿಸರವನ್ನು ನಾವೇ ಸಂರಕ್ಷಿಸೋಣಪ್ರಕೃತಿ ಫೌಂಡೇಶನ್ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ)

ಮಸ್ಕಿ : ತಾಲೂಕಿನ ಲಕ್ಷ್ಮಿ ಕ್ಯಾಂಪ್ ಗ್ರಾಮದ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪ್ರಕೃತಿ ಫೌಂಡಷನ್ (ರಿ) ಮಸ್ಕಿ ವತಿಯಿಂದ ಕರ್ನಾಟಕ ರಾಜ್ಯವನ್ನು ಹಸಿರು ನಾಗಿಸುವ ಅಭಿಯಾನಕ್ಕೆ ಶ್ರೀ ಮರಿಬಸವರಾಜ ಶ್ರೀ ಗಳು,
ಗಚ್ಚಿನ ಶ್ರೀಗಳು ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಸಿಗಳನ್ನು ಹಚ್ಚುವ ಮೂಲಕ ಚಾಲನೆ ನೀಡಿದರು.

ಪ್ರಕೃತಿ ಫೌಂಡೇಶನ್ ನಮ್ಮ ಜಿಲ್ಲೆಯಲ್ಲಿ ಪ್ರತಿಯೊಂದು ಹಳ್ಳಗಳಿಗೆ ಹೋಗಿ ಪ್ರತಿಯೊಬ್ಬರಿಗೂ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯ ಹಾಗೂ ಗಿಡ ಮರಗಳು ಬೆಳೆಸಿಕೊಂಡು ಬರುತ್ತಿರುವ ಶಿವಮೂರ್ತಿ ಗದ್ದಿಗೆಮಠ ರವರು ಕರ್ನಾಟಕ ರಾಜ್ಯವನ್ನು ಹಸಿರು ನಾಗಿಸುವ ಅಭಿಯಾನಕ್ಕೆ ಶುಭ ಹಾರೈಸಿ, ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿರ್ವದಿಸಿದರು.
ಪ್ರಕೃತಿ ಫೌಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ) ರವರು ಮಾತನಾಡಿ,
ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಈ ಅಭಿಯಾನದ ಯಶಸ್ವಿಗೆ ನೀವು ಕಾರಣಿಭೂತರಾಗಿ ಎಂದು ಮನವಿ ಮಾಡಿ ನಮ್ಮಗಾಗಿ ಇರುವ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂದುರು.
ಈ ವೇಳೆ, ಪರಿಸರ ಪ್ರೇಮಿಗಳು,ಭಕ್ತರು ಇದ್ದರು..