ಇತ್ತೀಚಿನ ಸುದ್ದಿ

ಶಿಕ್ಷಣದ ಹರಿಕಾರ ಶಿವಪುತ್ರಪ್ಪಜಾಲಹಳ್ಳಿಗೆ ನಿವೃತ್ತಿಯ ಆತ್ಮೀಯ ಬೀಳ್ಕೊಡುಗೆ

ದೇವದುರ್ಗ : 35 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹಿಡಿದ ಶಿಕ್ಷಕರಿಗೆ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ
ತಾಲೂಕಿನ ಸೋಮನಮರಡಿ ಗ್ರಾಮದ ಸರಕಾರಿ ಹಿರಿಯ
ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈ ವೇಳೆ, ಶಿಕ್ಷಕರಾದ ರವಿಕುಮಾರ್ ಚುಕನಹಟ್ಟಿ ರವರು ಮಾತನಾಡಿ,

ಎಲ್ಲಾ ಏಳು ಬೀಳುಗಳನ್ನು ದಾಟಿ ಹತ್ತು ಹಲವು ಹುದ್ದೆ ಯಶಸ್ವಿ ನಿಭಾಯಿಸಿ ಬಹುತೇಕ ಶಾಲೆಗಳಲ್ಲಿ ಕೊಠಡಿಯ ಸಮಸ್ಯೆ ಬಗೆಹರಿಸಿದ ಶ್ರೇಯಸ್ಸು ಶಿವಪುತ್ರಪ್ಪ ಶಿಕ್ಷಕರಿಗೆ ಸಲ್ಲುತ್ತದೆ .

1990 ರಲ್ಲಿ ಸೇವೆಗೆ ಸೇರಿ ತಮ್ಮ ಆರಂಭಿಕ ಸೇವೆಯನ್ನು ಸಿಂಧನೂರು ತಾಲೂಕಿನ ನಂಜಲದಿನ್ನಿ ಸರ್ಕಾರಿ ಶಾಲೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ 1995ರಲ್ಲಿ ದೇವದುರ್ಗ ತಾಲೂಕಿನ ಕಮಲದಿನ್ನಿ ಗ್ರಾಮಕ್ಕೆ ವರ್ಗಾವಣೆಗೊಂಡ ಅಲ್ಲಿ ಸುಮಾರು 10 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಲಿಂಗದಳ್ಳಿಗೆ ಮುಖ್ಯ ಶಿಕ್ಷಕರಾಗಿ ಬಡತಿ ಪಡೆದು ವರ್ಗಾವಣೆಗೊಂಡು ಸೇವೆ ಸಲ್ಲಿಸಿ ನಂತರ ತಾಲೂಕು ಪಂಚಾಯತಿಯಲ್ಲಿ ವಿಶೇಷ ಯೋಜನಾಡಿಯಲ್ಲಿ ಜಾಗೃತಿ ಕಾರ್ಯಕ್ರಮಗಳ ತಾಲೂಕು ಅಧಿಕಾರಿಯಾಗಿ ಅತ್ಯಂತ ಯಶಸ್ವಿಯಾಗಿ ಶಿಕ್ಷಣ ಜಾಗೃತಿ ಕಾರ್ಯಕ್ರಮಗಳನ್ನು ಸುಮಾರು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಲ್ಲದೆ ತಮ್ಮ ಹುಟ್ಟುರಾದ ಜಾಲಹಳ್ಳಿಗೆ ಶಿಕ್ಷಕರಾಗಿ ಬಡ್ತಿ ಹೊಂದಿ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸದ ಸ್ಥಿತಿಯಲ್ಲಿದ್ದ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ನಿಭಾಯಿಸಿ ಸಹಿ ಅನಿಸಿಕೊಂಡಿದ್ದಾರೆ ಹಿರಿಯ ಮುಖ್ಯ ಶಿಕ್ಷಕರಾಗಿ ಪದವನ್ನತ್ತಿ ಹೊಂದಿ ಸೌಂಡ್ ಮಾಡಿ ಶಾಲೆಯನ್ನು ಆಯ್ಕೆ ಮಾಡಿಕೊಂಡು 2020 ಜೂನ್ ನಿಂದ 2025 31ರವರೆಗೆ ಹಿರಿಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹಲವು ಬದಲಾವಣೆಗಳೊಂದಿಗೆ ಶಿಕ್ಷಣಕ್ರಾಂತಿಗೆ ನಾಂದಿ ಹಾಡಿದ್ದಾರೆ.

ಅಷ್ಟೇ ಅಲ್ಲದೆ ಸುಮಾರು 30 ವರ್ಷಗಳ ಕಾಲ ಶಿಕ್ಷಕ ಸಂಘದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಕ್ಷಕರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಮತ್ತು ನಿರ್ದೇಶಕರಾಗಿ ಎಲ್ಲಾ ರೀತಿಯ ಹುದ್ದೆಗಳನ್ನು ನಿಭಾಯಿಸಿ ತಮ್ಮ ವೃತ್ತಿಗೆ ಬರದೇ ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯಗಳನ್ನು ಭಾಗವಹಿಸಿ ಯಶಸ್ವಿಯಾಗಿದ್ದಾರೆ.

ಅಲ್ಲದೆ ದೇವದುರ್ಗ ತಾಲೂಕಿನ ಬಡ್ತಿ ಹೊಂದಿದ ಹಿರಿಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸೋಮನಮರಡಿ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿಯ ಹಾಡಿದ್ದಾರೆ ಎಂದರೆ ಬಹುಶ ತಪ್ಪಾಗಲಾರದು ಕಾರಣ ಊರ ಮಧ್ಯದ ಕೇವಲ ಮೂರು ಕೋಣಗಳೊಂದಿಗೆ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಅಂತಹ ಶಾಲೆಯನ್ನು ಗ್ರಾಮದ ಹೊರಭಾಗದಲ್ಲಿದ್ದ ಎರಡು ಕೋಟಿಗೆ ಶಿಫ್ಟ್ ಮಾಡಿಸಿ ಊರವರ ವಿರೋಧದ ನಡೆಯು ಮತ್ತು ಒಂದಿಷ್ಟು ಜನರ ಸಹಕಾರದೊಂದಿಗೆ ಶಾಲೆಯನ್ನು ಸ್ಥಳಾಂತರ ಗೊಳಿಸಿ ಗ್ರಾಮದ ಹಿರಿಯ ಮುಖಂಡರು ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ
ಸಹಾಯ ಸಹಕಾರದಿಂದ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ.

ಅವರ ಪ್ರಾಮಾಣಿಕತೆ ವಿದ್ಯಾರ್ಥಿಗಳಿಗೆ ಆಗ ತಕ್ಕಂತಹ ಅನ್ಯಾಯವನ್ನು ಕಳಖಂಡಿತವಾಗಿ ಖಂಡಿಸುವ ಮನೋಭಾವ ಶಿಕ್ಷಕರೊಂದಿಗೆ ಸಹಕಾರ ಉತ್ತಮ ಮಾರ್ಗದರ್ಶನ ಎಲ್ಲವೂ ಪ್ರಾಮಾಣಿಕವಾಗಿ ನಿಷ್ಠರಾಗಿ ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಒಳಿತನ್ನು ಮಾಡುವ ಯಾರೇ ಶಿಕ್ಷಕ ವೃತ್ತಿ ಉಳ್ಳವರು ಅವರ ಮಾರ್ಗದರ್ಶನವನ್ನು ಪಾಲಿಸುತ್ತಿದ್ದರು ಸುಧೀರ್ಘ ಸೇವೆಯನ್ನು ಸಲ್ಲಿಸಿ, ವಯೋ ಸಹಜ ನಿವೃತ್ತಿ ಹೊಂದಿರುವ ಶ್ರೀಯುತರು ನಿವೃತ್ತಿಯ ಜೀವನ ಸುಖಕರವಾಗಿರಲಿ ಅವರ ಆರೋಗ್ಯ ಆಯುರ್ ಆರೋಗ್ಯ ಉತ್ತಮವಾಗಿರಲಿ ಎಂದು ಶಾಲೆಯ ಶಿಕ್ಷಕರು ಎಂದು ಹರಸಿ ಹಾರೈಸುತ್ತದೆ. ಎಂದರು.

ಈ ವೇಳೆ, ಶಿಕ್ಷಕರು ಮಕ್ಕಳು ಇದ್ದರೂ.

Related Articles

Leave a Reply

Your email address will not be published. Required fields are marked *

Back to top button