ವಾಹನ ಅಡ್ಡ ಹಾಕುವಂತಿಲ್ಲ, ಕೀ ಕಸಿಯುವಂತಿಲ್ಲ: ಡಿಜಿಪಿ

ಮಂಡ್ಯ ಪೊಲೀಸರ ಕರ್ತವ್ಯಲೋಪದಿಂದ ಮಗುವೊಂದು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸ್ ಇಲಾಖೆ, ತಪಾಸಣೆ ನೆಪದಲ್ಲಿ ಸಕಾರಣವಿಲ್ಲದೆ ವಾಹನಗಳನ್ನು ಏಕಾಏಕಿ ತಡೆದು ನಿಲ್ಲಿಸಬಾರದು ಎಂದು ಹೊರಡಿಸಿದೆ.
ಕಟ್ಟಾಜ್ಞೆ ಈ ಕುರಿತು ಶನಿವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸರಿಗೆ ಸುತ್ತೋಲೆ ಹೊರಡಿಸಿರುವ ಡಿಜಿಪಿ ಡಾ. ಎಂ.ಎ ಸಲೀಂ, ವಾಹನಗಳ ತಪಾಸಣೆ ಸಂಬಂಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ.
ಹೆದ್ದಾರಿಗಳಲ್ಲಿ ಜಿಗ್ಜಾಗ್ ಬ್ಯಾರಿಕೇಡ್ ಅಳವಡಿಸಿ ತಡೆಯಬಾರದು. ರಸ್ತೆಯಲ್ಲಿ ಏಕಾಏಕಿ ಅಡ್ಡಬಂದು ವಾಹನ ಗಳನ್ನು ನಿಲ್ಲಿಸಬಾರದು. ವಾಹನಗಳ ಕೀ ತೆಗೆದುಕೊಳ್ಳಬಾರದು. ಬೈಕ್ ಹಿಂಬದಿ ಸವಾರನನ್ನು ಹಿಡಿದು ಎಳೆಯುವಂತಿಲ್ಲ. ಪ್ರಮುಖವಾಗಿ ಇಂಟಿಲೆಜೆನ್ಸ್ ಟ್ರಾಫಿಕ್ಮ್ಯಾ ನೇಜ್ಮೆಂಟ್ ಸಿಸ್ಟಮ್ (ಐಟಿ ಎಂಎಸ್) ಜಾರಿಯಿರುವ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ತಂತ್ರಜ್ಞಾನ ಆಧರಿತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲು ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.

ರಸ್ತೆಗಳಲ್ಲಿ ವೇಗವಾಗಿ ಚಲಾಯಿಸುವ ವಾಹನಗಳನ್ನು ಬೆನ್ನಟ್ಟುವ ಬದಲಿಗೆ ವಾಹನ ಸಂಖ್ಯೆ ಗುರುತು ಮಾಡಿಕೊಂಡು ಜಿಲ್ಲಾ ಸರಹದ್ದುಗಳ ನಿಯಂತ್ರಣ ಕೋಣೆಗಳಿಗೆ ಸಂದೇಶ ರವಾನಿಸಿ ಪ್ರಕರಣ ದಾಖಲಿಸಬೇಕು.
ಸಂಚಾರ ನಿಯಮ ಉಲ್ಲಂಘನೆ ಸಲುವಾಗಿ ವಾಹನಗಳನ್ನು ತಪಾಸಣೆ ಮಾಡುವಾಗ ಪ್ರತಿಫಲನ ಜಾಕೆಟ್ಗಳನ್ನು ಧರಿಸಬೇಕು: ಸಂಜೆ ವೇಳೆ ಎಲ್ಇಡಿ ಬಟನ್ಗಳನ್ನು ಉಪಯೋಗಿಸಬೇಕು. ಕರ್ತವ್ಯ ನಿರ್ವಹಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು ಎಂದು ನಿರ್ದೇಶಿಸಲಾಗಿದೆ.