ಇತ್ತೀಚಿನ ಸುದ್ದಿ

ಬಿಸಿಲನ್ನು ಲೆಕ್ಕಿಸದೇ ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ.

ಮಸ್ಕಿ :  ಶಾಸಕ ಆರ್ ಬಸವನಗೌಡ ತುರುವಿಹಾಳ ರವರು ಅಂಬೇಡ್ಕರ್ ರವರ ಅಭಿಮಾನಿಗಳ
ಜೊತೆ ಭರ್ಜರಿ ನೃತ್ಯ ಮಾಡಿದ್ದಾರೆ.

ಪಟ್ಟಣದಲ್ಲಿ ತಾಲ್ಲೂಕು ಆಡಳಿತದ
ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗನ ರಾವ್ ಅವರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶಾಸಕ ಬಸವನಗೌಡ ತುರುವಿಹಾಳ ಭಾಗವಹಿಸಿದ್ದರು. ಜೊತೆಗೆ ನೂರಾರು ದಲಿತ ಪರ ಸಂಘಟನೆ ಗಳು ಹಾಗೂ
ಅಂಬೇಡ್ಕರ್ ರವರ ಅಭಿಮಾನಿಗಳು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ,ಜೊತೆ ಭೀಮನ ಹಾಡಿಗೆ ಭರ್ಜರಿ ಸ್ಟೆಪ್ಸ್​ ಹಾಕಿದರು. ಶಾಸಕರ ಜೊತೆ ಅಭಿಮಾನಿಗಳು
ಕುಣಿದು ಕುಪ್ಪಳಿಸಿದರು. ಶಾಸಕರು ಬಿರು ಬಿಸಿಲಿನಲ್ಲಿ
ನೃತ್ಯ ಮಾಡಿದ್ದು, ಎಲ್ಲರ ಗಮನ ಸೆಳೆಯಿತು.

ತಹಶಿಲ್ದಾರರಾದ ಡಾ.ಮಲ್ಲಪ್ಪ ಕೆ.ಯರಗೋಳ,
ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಇಒ ಅಮರೇಶ ಯಾದವ್,ಪುರಸಭೆ ಅಧಿಕಾರಿ ನರಸರಡ್ಡಿ,ನೀರಾವರಿ ಇಲಾಖೆ ಅಧಿಕಾರಿ ದಾವುದ್,ಶಿಕ್ಷಕರಾದ ಪಂಪಾಪತಿ ಹೂಗಾರ, ಬಾಲಸ್ವಾಮಿ ಹಂಪನಾಳ ರವರ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಜಗಜೀವನರಾಂ ರವರ ಪೋಟೋ ಮೆರವಣಿಗೆಯಲ್ಲಿ ಟ್ರಾಕ್ಟರ್ ಚಾಲನೆ ಮಾಡುವುದರ ಮೂಲಕ ಗಮನ ಸೆಳೆದರು.

Related Articles

Leave a Reply

Your email address will not be published. Required fields are marked *

Back to top button