ಇತ್ತೀಚಿನ ಸುದ್ದಿ

ಯೇಸುಕ್ರಿಸ್ತರ ತತ್ವ ಪಾಲನೆ ಎಲ್ಲರಿಗೂ ಅನುಕೂಲ : ಡಾ. ಬರ್ನಾಡ್ ಮೊರಾಸ್

ಚಾಮರಾಜನಗರ : ತಾಲೂಕಿನ ಸರಗೂರು ಗ್ರಾಮದ ಸಂತ ಜೋಸೆಫರ ನವೀಕೃತ ದೇವಾಲಯ ಉದ್ಘಾಟನೆ, ಆಶೀರ್ವಚನ ಮತ್ತು ದಿವ್ಯ ಬಲಿ ಪೂಜೆಯಲ್ಲಿ ಮೈಸೂರು ಧರ್ಮ ಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರಾಸ್ ಮಾತನಾಡಿ, ಯೇಸುಕ್ರಿಸ್ತನಲ್ಲಿ ಭರವಸೆ ಇಡಬೇಕು ಅವರನ್ನು ನಂಬಿದರೆ ಉತ್ತಮ ಜೀವನಕ್ಕೆ ಸಹಾಯಕವಾಗುತ್ತದೆ, ಅಲ್ಲದೆ ತಂದೆ ತಾಯಿಗಳನ್ನು ಗೌರವಿಸಬೇಕು ಎಂದು ತಿಳಿಸಿದರು.


ನಂತರ ಧರ್ಮ ಗುರುಗಳು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದರು,
ಇದೆ ವೇಳೆ ಶೌಚಾಲಯ ನಿರ್ಮಿಸಲು ಶಾಸಕರಿಗೆ ಮನವಿ ಸಲ್ಲಿಸಿದರು ನಂತರ ಮನವಿಗೆ ಸ್ಪಂದಿಸಿದ ಶಾಸಕರು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ಶಾಸಕರ ನಿಧಿಯಿಂದ 1 ತಿಂಗಳೊಳಗೆ ಮಾಡಿಸಿಕೊಡುತ್ತೇನೆ ಎಂದು ತಿಳಿಸಿದರು.
ಕೊಳ್ಳೇಗಾಲ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ಆಗಮಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೋಸೆಫ್.ಎನ್, ಚಿನ್ನಯ್ಯ ಮಾಸ್ಟರ್, ಚಿನ್ನಯ್ಯ ಪೊಲೀಸ್,ಚಿಕ್ಕಸ್ವಾಮಿ, ಎಸ್.ಆರ್.ನಾಗರಾಜು, ಎಸ್.ಆರ್.ಮಾದೇವ, ಚಿಕ್ಕಬಸವಯ್ಯ, ಡಾಕ್ಟರ್ ಚನ್ನಬಸಪ್ಪ, ಕುಮಾರ್.ಎನ್, ಸಂತೋಷ್, ನಟರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button