ಇತ್ತೀಚಿನ ಸುದ್ದಿ

BREAKING : ಲಕ್ಷ್ಮೀ ಹೆಬ್ಬಾಳ್ಕರ್​​ ಬೆಂಬಲಿಗರಿಂದ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ!

ಬೆಳಗಾವಿ: ಸುವರ್ಣಸೌಧದಲ್ಲಿ ಇಂದು ಎಂಎಲ್​​​ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣವು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಹೆಬ್ಬಾಳ್ಕರ್ ಅವರ ಬೆಂಬಲಿಗರು ಎನ್ನಲಾದವರಿಂದ ಸುವರ್ಣ ಸೌಧದ ಒಳಗೆಯೇ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಪೊಲೀಸರು, ಮಾರ್ಷಲ್​​​ಗಳು ಎದುರಲ್ಲೇ ಸುವರ್ಣಸೌಧದ ಗೇಟ್​​ ಒದ್ದು ಬಾರೋ ಹೊರಗೆ ಎಂದು ರವಿಯವರನ್ನು ಅವಾಜ್​​ ಹಾಕಲಾಗಿದೆ.

ಗೇಟ್​​​​ಗೆ ಕಾಲಿನಿಂದ ಒದ್ದು ಕೆಲವರು ಉದ್ಧಟತನ ತೋರಿದ್ದಾರೆ. ರವಿ ಅವರನ್ನು ಸುಮಾರು 15 ಜನರಿಂದ ಮುತ್ತಿಗೆ ಹಾಕಿದಾಗ, ಅವರ ವಿರುದ್ಧ ಘೋಷಣೆ ಕೂಗುವುದಲ್ಲದೇ ಹಲ್ಲೆಗೆ ಯತ್ನಿಸಿರುವ ಆರೋಪವಿದೆ. ಈ ಹೈಡ್ರಾಮದ ಘಟನೆ ಸಂಬಂಧ 15 ಜನರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button