ಇತ್ತೀಚಿನ ಸುದ್ದಿ

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವಕ್ಕೆ ಭವ್ಯ ಚಾಲನೆ

ಕೊಟ್ಟೂರು: ಒಬ್ಬ ಧರ್ಮ ಸಹಿಷ್ಣುತೆಯ ಪ್ರತೀಕಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಭವ್ಯ ಕಾರ್ತಿಕೋತ್ಸವಕ್ಕೆ ಹಿರೇಮಠದ ಮುಂಭಾಗದ ಆವರಣದಲ್ಲಿ ಹಿರಿಸಲಾಗಿದ್ದ ಪ್ರಣತಿಗಳಿಗೆ ಎಂ ಎಸ್ ದೀವಾಕರ್ ಜಿಲ್ಲಾಧೀಕಾರಿಗಳು, ಕ್ರೀಯಾ ಮೂರ್ತಿಗಳು ಅರ್ ಎಂ ಶಿವ ಪ್ರಕಾಶ್ ಕೊಟ್ಟೂರು ದೇವರು ,ಶ್ರೀಮನ್ ನಿರಂಜನ ಜಗದ್ಗುರು ಸೋಮಶೇಖರ ದೇವರು , ಎಚ್ ಗಂಗಾಧರಪ್ಪ ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ, ಹನುಮಂತಪ್ಪ ಕಾರ್ಯನಿರ್ವಾಹಕ ಆಧೀಕಾರಿಗಳು ,ಜಿ ಕೆ ಅಮರೇಶ್ ತಹಶೀಲ್ದಾರರು,ಶೇಖರಯ್ಯ ಧರ್ಮಕರ್ತರು ಇತರರು ಸೇರಿದಂತೆಸೋಮವಾರ ಇಳಿ ಸಂಜೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.

ಈ ಪ್ರಕ್ರಿಯೆಯಲ್ಲಿ ಉಭಯ ಶ್ರೀಗಳು ಚಾಲನೆ ನೀಡುತಿದ್ದಂತೆ ಭಕ್ತರು ಸಾಲಾಗಿ ಇರಿಸ ಲಾಗಿದ್ದ ದೀಪಗಳಿಗೆ ಎಣ್ಣೆ ಹಾಕುವುದರ ಮೂಲಕ ಶ್ರೀ ಸ್ವಾಮಿಗೆ ನಮಸ್ಕಾರಿಸುವ ಮೂಲಕ ಭಕ್ತಿಯನ್ನುಸಮರ್ಪಿಸಿದರು.ಇದರಂತೆ ಶ್ರೀ ಸ್ವಾಮಿಯ ತೊಟ್ಟಿಲ ಮಠ,ಮೂರ್ಕಲ್ ಮಠಗಳಲ್ಲಿ, ಊರಮ್ಮನ ಬಯಲು, ಮಹಲ್ ಮಠ ಗಚ್ಚಿನಮಠ ಸೇರಿದಂತೆ ಇತರೆಡೆಗಳಲ್ಲಿ ಕಾರ್ತಿಕೋತ್ಸವದ ದೀಪಗಳ ಬೆಳಗುವಿಕೆಗೆ ಚಾಲನೆ ದೊರಕಿತು.ಈ ಸಂಧರ್ಭದಲ್ಲಿ ಸಹ ಧರ್ಮಕರ್ತರು, ಕಟ್ಟಿಮನಿ ದೈವದವರು, ಆಯಾಗಾರ ಬಳಗದವರು , ಮತ್ತಿತರರು ಭಕ್ತರು ಇದ್ದರು

ವರದಿ: C ಕೊಟ್ರೇಶ್ tv8newskannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button