ಸಿನಿಮಾ

‘ಪುಷ್ಪ- 2’ ಪ್ರೀಮಿಯರ್ ಶೋ ವೀಕ್ಷಣೆ ವೇಳೆ ಕಾಲ್ತುಳಿತ ; ಮಹಿಳೆ ಸಾವು, ಮಗನ ಸ್ಥಿತಿ ಗಂಭೀರ.!

ಹೈದರಾಬಾದ್ : ಸಂಧ್ಯಾ ಚಿತ್ರಮಂದಿರದಲ್ಲಿ ಡಿಸೆಂಬರ್ 4 ರಂದು ಅಲ್ಲು ಅರ್ಜುನ್ ಅವರನ್ನು ನೋಡಲು ಭಾರಿ ಜನಸಮೂಹ ಜಮಾಯಿಸಿದ್ದರು.

ಹೈದರಾಬಾದ್ ನಲ್ಲಿ ಪುಷ್ಪ 2 ಪ್ರೀಮಿಯರ್ ಅವ್ಯವಸ್ಥೆ ದುರಂತಕ್ಕೆ ಕಾರಣವಾಯಿತು. ಚಿತ್ರಮಂದಿರದ ಹೊರಗೆ ಕಾಲ್ತುಳಿತ ಉಂಟಾಗಿ 39 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಅವರ ಮಗ ಗಂಭೀರ ಸ್ಥಿತಿಯಲ್ಲಿದ್ದಾರೆ.ಭಾರಿ ಭದ್ರತೆ ಮತ್ತು ಪೊಲೀಸ್ ರಕ್ಷಣೆಯೊಂದಿಗೆ ಅಲ್ಲು ಅರ್ಜುನ್ ಕಾಣಿಸಿಕೊಂಡರು.

ದಿಲ್ಸುಖ್ ನಗರದ ನಿವಾಸಿ ರೇವತಿ (39) ತನ್ನ ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳಾದ ಶ್ರೀ ತೇಜ್ (9) ಮತ್ತು ಸಾನ್ವಿಕಾ (7) ಅವರೊಂದಿಗೆ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಲು ಆರ್ ಟಿಸಿ ಕ್ರಾಸ್ ರಸ್ತೆಯಲ್ಲಿರುವ ಸಂಧ್ಯಾ 70 ಎಂಎಂ ಚಿತ್ರಮಂದಿರಕ್ಕೆ ತೆರಳಿದ್ದರು.ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದಾಗ, ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಈ ವೇಳೆ ಕಾಲ್ತುಳಿ ಉಂಟಾಗಿದೆ. ಕಾಲ್ತುಳಿತದ ಸಮಯದಲ್ಲಿ, ರೇವತಿ ಮತ್ತು ಅವರ ಮಗ ಶ್ರೀ ತೇಜ್ ಪ್ರಜ್ಞೆ ಕಳೆದುಕೊಂಡರು. ಪೊಲೀಸರು ತಕ್ಷಣ ಅವರನ್ನು ವಿದ್ಯಾನಗರದ ದುರ್ಗಾ ಭಾಯ್ ದೇಶಮುಖ್ ಆಸ್ಪತ್ರೆಗೆ ಸ್ಥಳಾಂತರಿಸಿದರು.ಆದರೆ ಚಿಕಿತ್ಸೆ ಫಲಿಸದೇ ರೇವತಿ ಮೃತಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button