ರಾಜ್ಯಸುದ್ದಿ

ಸಾರಿಗೆ ಬಸ್ ಇಲ್ಲದೆ ಪರದಾಟ, ಪ್ರಯಾಣಿಕರ ಆಕ್ರೋಶ

ನಂಜನಗೂಡು: ಸಾರಿಗೆ ಬಸ್ ಇಲ್ಲದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದು ಸಾರಿಗೆ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಂಜನಗೂಡು ನಗರದ ಹಳೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದಿಂದಲೂ ಸಂಜೆ ತನಕ ಕಾದು ಕುಳಿತಿರುವ ಪ್ರಯಾಣಿಕರು ಬಸ್ ಗಳಿಗಾಗಿ ಪರದಾಡುವಂತಾಗಿದೆ.
ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ, ನೆಲ್ಲಿತಾಳಪುರ, ಅಲ್ಲಯ್ಯನಪುರ, ಚಂದ್ರವಾಡಿ, ಹೆಡಿಯಾಲ, ಸರಗೂರು, ಕಾಟೂರು, ಹುರಾ, ಹುಲ್ಲಹಳ್ಳಿ ಗ್ರಾಮಗಳಿಗೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.


ಕಾಡಂಚಿನ ಗ್ರಾಮಗಳಿಗೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತೆರಳಲು ಸಾರಿಗೆ ಬಸ್ ಸೌಲಭ್ಯವಿಲ್ಲ. ಪ್ರತಿನಿತ್ಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಇರುವ ಒಂದೆರಡು ಬಸ್ಸುಗಳಲ್ಲೇ ನೂಕು ನುಗ್ಗಲಿನಲ್ಲಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button