ರಾಜಕೀಯ

ಮುಡಾದಲ್ಲಿ ಹಗರಣದಲ್ಲಿ ಸಹಕರಿಸಿದಕ್ಕೆ ಕುಮಾ‌ರ್ ನಾಯಕ್‌ಗೆ MP ಟಿಕೆಟ್: ವಿಜಯೇಂದ್ರ

ಬೆಂಗಳೂರು: ಸಿದ್ದರಾಮಯ್ಯ ಈಗಲಾದರೂಭಂಡತನ ಬಿಟ್ಟು ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.

ಮುಡಾ ಕಚೇರಿ ಮೇಲೆ ಇ.ಡಿ ದಾಳಿ ಸಂಬಂಧ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 3-4 ತಿಂಗಳಿಂದ ಮುಡಾ ಹಗರಣ ಚರ್ಚೆ ಆಗಿತ್ತು. ಬಿಜೆಪಿ-ಜೆಡಿಎಸ್ ಹೋರಾಟ ಮಾಡಿ ಪಾದಯಾತ್ರೆ ಮಾಡಿತ್ತು. ಪ್ರಾಮಾಣಿಕವಾಗಿ ಆಡಳಿತ ಮಾಡುತ್ತೇವೆ. ಯಾವುದೇ ಕಳಂಕ ಇಲ್ಲ ಎಂದು ಸಿಎಂ ಹೇಳಿದ್ದರು. ಆದರೆ ಮುಡಾ ಕೇಸ್ ಅಕ್ರಮ ಆಗಿ ಎಷ್ಟು ಭಂಡತನ ಮಾಡಿದ್ದಾರೆ. ಮೊದಲು ಹಗರಣ ನಡೆದಿಲ್ಲ ಎಂದರು. ಬಿಜೆಪಿ ಅವರಿಗೆ ತಲೆ ಕೆಟ್ಟಿದೆ ಅಂದಿದ್ದರು. ಬಳಿಕ ಒಪ್ಪಿಕೊಂಡು ಮುಡಾ ಸೈಟ್ ವಾಪಸ್ ಕೊಟ್ಟಿದ್ದಾರೆ. ಹೈಕೋರ್ಟ್, ಸೆಷನ್ಸ್ ಕೋರ್ಟ್ ತೀರ್ಪು ನಂತರ ಸಿಎಂ ಭಂಡತನ ಬಿಡಬೇಕಿತ್ತು. ಈಗ ಇ.ಡಿ ಅಖಾಡಕ್ಕೆ ಇಳಿದಿದೆ. ದಾಳಿ ಆಗಿದೆ. ಸಿಎಂ ತಾನು ನಿರಪರಾಧಿ ಅಂತ ಬಿಂಬಿಸುವ ಕೆಲಸ ಮಾಡಿದ್ರು. ಈಗ ರಾಜಕೀಯ ದಾಳಿ ಅಂತ ಇ.ಡಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣು ಆಗಿಲ್ಲ ಅನ್ನೋ ರೀತಿ ಇದ್ದಾರೆ. ಸಿಎಂಗೆ ಕಿಂಚಿತ್ತು ಕಾನೂನು ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಸೈಟ್ ವಾಪಸ್ ಕೊಟ್ಟರೂ ಕಾಲ ಮುಗಿದಿದೆ. ಸಿದ್ದರಾಮಯ್ಯ ಅವರು ಗೌರವಯುತ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಮುಡಾ ಕೇಸ್‌ನಲ್ಲಿ ಅಂದಿನ ಅಧಿಕಾರಿ ಕುಮಾರ್

ನಾಯಕ್ ಸಿದ್ದರಾಮಯ್ಯ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರ್ ನಾಯಕ್‌ಗೆ ಎಂಪಿ ಟಿಕೆಟ್ ಕೊಟ್ಟಾಗಲೇ ಅನುಮಾನ ಇತ್ತು. ಸಿಎಂ ಅವರ ಕುಟುಂಬಕ್ಕೆ ಲಾಭ ಪಡೆದಿದ್ದಾರೆ. ಅದಕ್ಕೆ ಬೆಂಬಲವಾಗಿ ನಿಂತಿದ್ದು ಕುಮಾರ್ ನಾಯಕ್ ಅವರು. ಹೀಗಾಗಿ ಸಿದ್ದರಾಮಯ್ಯ ಅವರು ಟಿಕೆಟ್ ಕೊಟ್ಟಿದ್ದಾರೆ. ಹೈಕೋರ್ಟ್ ಕೂಡಾ ಅವರ ಪಾತ್ರ ಪರಿಗಣಿಸಿದೆ. ಮುಂದೆ ರಾಯಚೂರು ಸಂಸದ ಕುಮಾರ್ ನಾಯಕ್ ಅವರು ಕೂಡ ರಾಜೀನಾಮೆ ಕೊಡೋ ಸಮಯ ಬರಬಹುದು ಎಂದು ಭವಿಷ್ಯ ನುಡಿದರು.

ಮರಿಗೌಡ ರಾಜೀನಾಮೆ ಕೊಡುತ್ತಾರೆ. ಸಚಿವ ಮಹದೇವಪ್ಪ ಬಿಪಿಗೆ ರಾಜೀನಾಮೆ ಕೊಟ್ಟಿದ್ದಾರೆ ಎಂದಿದ್ದಾರೆ. ಮುಂದೆ ಈ ಸರ್ಕಾರದಲ್ಲಿ ಇನ್ನು ಯಾರಿ ಗೆ ಬ್ಲಡ್ ಪ್ರಷರ್ ಬರುತ್ತೆ ನೋಡುತ್ತಿರಿ. ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಕೊಟ್ಟೇ ಕೊಡುತ್ತಾರೆ. ಸಿದ್ದರಾಮಯ್ಯ ಓಡಿ ಹೋಗಲು ಸಾಧ್ಯವಿಲ್ಲ. ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಲಿ ಎಂದು ತಿಳಿಸಿದರು.

ವರದಿ : ಪೂರ್ಣಿಮಾ ಪವಾರ್ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button