ರಾಜ್ಯಸುದ್ದಿ

ಉತ್ತಮ ಸಮಾಜ ನಿರ್ಮಾಣದತ್ತ ಹೆಜ್ಜೆ ಇಡೋಣ: ವೀರಭದ್ರಪ್ಪ

ಸರಗೂರು : ತಾಲೂಕಿನ ಪಟ್ಟಣದ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಮಂಗಳವಾರ ದಂದು ನಡೆದ ಸಭೆಯಲ್ಲಿ ತಾಲೂಕು ಘಟಕದ ನೂತನ ನಿರ್ದೇಶಕರು.( ಅಜೀವ ಸದಸ್ಯತ್ವ ) ಸಿದ್ದಪ್ಪ ಬಾಡಿಗೆ . ಜಯಕುಮಾರ್ ಶಿವಪುರ. ಶಿವಕುಮಾರ್ ಚಾಮಲಾಪುರ. ಶಿವಾನಂದಮೂರ್ತಿ ದಡದಹಳ್ಳಿ. ಕೆ ಎಂ ಸತೀಶ್ ತೆರಣೆಮುಂಟಿರವರನ್ನು ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಮಂಡಳಿರವರು ಸನ್ಮಾನಿಸಲಾಗಿತ್ತು ಇದೇ ಸಂದರ್ಭದಲ್ಲಿ ಅಧ್ಯಕ್ಷ ವೀರಭದ್ರಪ್ಪ ( ನಟರಾಜ್ ) ಮಾತನಾಡಿ ಎಲ್ಲರೂ ಜೊತೆಗೂಡಿ ಸಮಾಜ ಕಟ್ಟುವ ಕಡೆ ಹೆಜ್ಜೆ ಇಡೋಣ ಎಂದು ಎಲ್ಲಾ ಗ್ರಾಮದ ಯಜಮಾನರು ಹಾಗೂ ಮುಖಂಡರು ಮತ್ತು ಯುವಕರನ್ನು ಜೊತೆಗೂಡಿಸಿಕೊಂಡು ಸಮಾಜ ಏಳಿಗೆಗಾಗಿ ದುಡಿಯೋಣ ಎಂದು ಕಿವಿಮಾತು ಹೇಳಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಹಾಜರಿದ್ದ ಕಾರ್ಯಧ್ಯಕ್ಷರಾದ ಸಿ ಕೆ ಗಿರೀಶ್,ಕೋಶ ಅಧ್ಯಕ್ಷ ಎಸ್ ಎನ್ ಪ್ರಕಾಶ್,ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಉಪಾಧ್ಯಕ್ಷ ಸಿದ್ದಪ್ಪ,ಬಸವ ಬಳಗ ಸಮಿತಿ ಅಧ್ಯಕ್ಷ ಹಂಚೀಪುರ ಗಣಪತಿ,ಕಾರ್ಯದರ್ಶಿ ಬಸವರಾಜು, ನಿರ್ದೇಶಕರುಗಳಾದ ಬಾಡಗ ಮಾದಪ್ಪ,ಮಂಜು, ಶ್ರೀಕಂಠಪ್ಪ, ಸುರೇಶ್,ವಿಕೇಶ್, ಸಿದ್ದಪ್ಪ, ಮಹದೇವಪ್ಪ, ಯುವ ಸಮಿತಿ ಅಧ್ಯಕ್ಷ ನಂದೀಶ್,ಸಮಾಜದ ಮುಖಂಡರು ಭಾಗವಹಿಸಿದರು.

ವರದಿ : ಹಾದನೂರು ಚಂದ್ರ tv8kannada ಸರಗೂರು

Related Articles

Leave a Reply

Your email address will not be published. Required fields are marked *

Back to top button