ನವದೆಹಲಿ: ಭಾರತದ ವಿದ್ಯುತ್ ಮೋಹನ್ (30-year-old Vidyut Mohan) ಎಂಬ ವ್ಯಕ್ತಿ ಪೋರ್ಟಬಲ್ ಮತ್ತು ವೆಚ್ಚ-ಪರಿಣಾಮಕಾರಿ ಯಂತ್ರವೊಂದನ್ನು ಆವಿಷ್ಕರಿಸಿದ್ದು, ಇದನ್ನು ವಾಯು ಮಾಲಿನ್ಯದ ಸಂಭಾವ್ಯ ಪರಿಹಾರ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಈ ವ್ಯಕ್ತಿಯನ್ನು ಪ್ರಧಾನಿ ಮೋದಿ (Prime Minister Narendra Modi) ಭೇಟಿ ಮಾಡಿದ್ದಾರೆ. ವಿಶ್ವಸಂಸ್ಥೆ ಆಯೋಜಿಸಿರುವ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ (Climate change summit) ಪಾಲ್ಗೊಳ್ಳಲು 2 ದಿನಗಳ ಪ್ರವಾಸದ ಭಾಗವಾಗಿ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ (Scotland’s Glasgow)ವಾಸವಾಗಿರುವ ದೆಹಲಿ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ (Mechanical Engineer) ವಿದ್ಯುತ್ ಮೋಹನ್ರನ್ನು ಪ್ರಧಾನಿ ಭೇಟಿ ಮಾಡಿದ್ದಾರೆ.
ದೆಹಲಿಯ ವಿಷಕಾರಿ (Delhi’s toxic air)ಗಾಳಿಯಿಂದಾಗಿ 30 ವರ್ಷದ ವಿದ್ಯುತ್ ಮೋಹನ್ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು ಅಥವಾ ಅವರ ಅಜ್ಜಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದುದ್ದನ್ನು ನೋಡುತ್ತಿದ್ದರು. ಈ ಹಿನ್ನೆಲೆ ಅವರು ಶುದ್ಧ ಗಾಳಿಯ ಪರಿಹಾರಗಳ ಜಾಗದಲ್ಲಿ ಕೆಲಸ ಮಾಡಲು ನಿರ್ಧರಿಸಿದರು ಮತ್ತು ಅವರ ಆವಿಷ್ಕಾರಕ್ಕೆEarthshotಪ್ರಶಸ್ತಿಯೂ ದೊರಕಿತು.
ಈ ಯಂತ್ರದ ಉಪಯೋಗವೇನು?
ಈ ಆವಿಷ್ಕಾರವು ಸಣ್ಣ-ಪ್ರಮಾಣದ, ಟ್ರ್ಯಾಕ್ಟರ್ ಅಳವಡಿಸಬಹುದಾದ ಸಾಧನವಾಗಿದ್ದು, ಇದು ಟನ್ಗಳಷ್ಟು ಕೃಷಿ ತ್ಯಾಜ್ಯವನ್ನು ನವೀಕರಿಸಬಹುದಾದ ಇಂಧನ ಮತ್ತು ರಸಗೊಬ್ಬರಗಳಾಗಿ ಪರಿವರ್ತಿಸುತ್ತದೆ. ಈ ವಿಕೇಂದ್ರೀಕೃತ ಉಪಕರಣವು ಅಕ್ಕಿಯ ಸ್ಟ್ರಾಗಳು, ತೆಂಗಿನ ಚಿಪ್ಪುಗಳಿಂದ ಶಕ್ತಿಯನ್ನು ಸೃಷ್ಟಿಸಲು ಪರಿವರ್ತಿಸುತ್ತದೆ.